Friday 14 October, 2011

ಪುಸ್ತಕ ಪರಿಚಯ - "ಗ್ರಹಣ"


ಒಮ್ಮೆ ಕೈಗೆತ್ತಿಕೊಂಡರೆ ಕೆಳಗಿಡುವ ಮನಸ್ಸೇ ಆಗುವುದಿಲ್ಲ. ಭೈರಪ್ಪನವರ ಕೃತಿಗಳೇ ಹಾಗೆ!!

"ಗ್ರಹಣ" ಇದು ೧೯೭೨ರಲ್ಲಿ ಮೊದಲ ಮುದ್ರಣ ಕಂಡ ಕೃತಿ. ಸೂರ್ಯಗ್ರಹಣದ ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ಪ್ರಾರಂಭವಾಗುವ ಕಥೆ ಮುಂದೆ ಧರ್ಮ-ಅಧರ್ಮದ ವಿಷಯವಾಗಿ ಸಾಗುತ್ತದೆ. ಮಠ, ಮಂದಿರ, ದೇವರು, ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ಸನ್ಯಾಸ, ಗೃಹಸ್ಥಾಶ್ರಮ, ಸಾಮಾಜಿಕ ಕಾರ್ಯ - ಹೀಗೆ ನಾನಾ ವಿಷಯಗಳ ಬಗ್ಗೆ ಪರ-ವಿರುದ್ಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಕಥೆ ಸಾಗುತ್ತದೆ. ಓದುಗರನ್ನು ಅರೆಕ್ಷಣವಾದರು ಈ ಬಗ್ಗೆ ಚಿಂತಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಆಯ್ದ ಒಂದೆರಡು ಸಾಲುಗಳು -- " ಅಲ್ಲಿ ಗ್ರಹಣವಾಗುಕ್ಕೂ ಇಲ್ಲಿ ಹಂಡೆಗೆ ಹುಳಿ ಹಾಕುಕ್ಕೂ ಏನು ಸಂಬಂಧ ಅಂತಲೇ?"
"ಎಷ್ಟೋ ಸಲ ಬರೀ ಸೈನ್ಸ್ ಎಲ್ಲತಕ್ಕೂಉತ್ತರ ಹೇಳುಲ್ಲ. ಗ್ರಹಣ ಹಿಡಿದ ವರ್ಷ ಮಾವಿನಹಣ್ಣುಗಳೆಲ್ಲ ಕೊಳೆತು ಹೋಗುತ್ತೆ, ಯಾಕೆ ಹೇಳಿ?"

ಲೇಖಕರು - ಎಸ್. ಎಲ್. ಭೈರಪ್ಪ
ವಿತರಕರು - ಸಾಹಿತ್ಯ ಭಂಡಾರ, ಬಳೇಪೇಟೆ ಬೆಂಗಳೂರು

No comments:

Post a Comment