Thursday 27 January, 2011

(ಹ)ಗ(ರ)ಣರಾಜ್ಯೋತ್ಸವ !!!

ಇತ್ತೀಚಿಗೆ ಭಾರತ ದೇಶದ ಉದ್ದಗಲಕ್ಕೂ ಆಚರಿಸಿದ "ಸಂಭ್ರಮ"ದ ಗಣರಾಜ್ಯೋತ್ಸವದ ಸಂಧರ್ಭದಲ್ಲಿ ಈ ಆಲೋಚನೆ.

from Google images

ಎಲ್ಲರಿಗೂ ತಿಳಿದಿರುವಂತೆ "ಗಣರಾಜ್ಯೋತ್ಸವ" - by definition - ದೇಶಕ್ಕೆ ಒಂದು ಸಂವಿಧಾನ ರೂಪಿಸಿ ಜಾರಿಗೊಳಿಸಿದ ನೆನಪಿಗಾಗಿ ನಡೆಯುವ ವಾರ್ಷಿಕ ಆಚರಣೆ. ಇದೆ ೨೬ರಂದು ದೇಶದೆಲ್ಲೆಡೆ ಸಂಭ್ರಮದ ೬೨ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಈ ಸಂಧರ್ಭದಲ್ಲಿ ದೇಶದಲ್ಲಿ ನಡೆದ-ನಡೆಯುತ್ತಿರುವ ವಿಧ್ಯಮಾನಗಳನ್ನು ಗಮನಿಸಿದರೆ ಇದು ಗಣರಾಜ್ಯೋತ್ಸವೋ ಅಥವಾ ಹಗರಣರಾಜ್ಯೋತ್ಸವವೋ? ಎಂದೆನಿಸಿದರೆ ಆಶ್ಚರ್ಯವಿಲ್ಲ!!!

ದಿನ ಬೆಳಗಾದರೆ ಪತ್ರಿಕೆಯ ಮುಖಪುಟದ ತುಂಬೆಲ್ಲ ಬರೀ ಮೋಸ, ವಂಚನೆ, ಹಗರಣಗಳೇ!!! - "2G scam, land scam, mining scam, black money in foreign accounts,  CWG scam - ಬರೀ ಇವೇ ಸುದ್ದಿ. ರೌಡಿಗಳ ಬೀದಿ ಕಾಳಗ, ಸರಕಾರಿ ಇಲಾಖೆಯಲ್ಲಿನ ಲಂಚಾವತಾರ - ಇವೆಲ್ಲ ನೋಡಿದರೆ ದೇಶದಲ್ಲಿ ಒಂದು ಕಾನೂನು/ಸಂವಿಧಾನ ಅಸ್ಥಿತ್ವದಲ್ಲಿ ಇದೆಯೇ ಎಂದು ಯೋಚಿಸುವ ಪರಿಸ್ಥಿತಿ ಬಂದೊದಗಿದೆ. ಇವೆಲ್ಲದರ ನಡುವೆ ಎಲ್ಲೋ ಅಪರೂಪಕ್ಕೆ ಕಾಣಸಿಗುವ ಒಂದಿಬ್ಬರು ನಿಷ್ಟಾವಂತ ಅಧಿಕಾರಿಗಳು ತಮ್ಮ ಜೀವದ ಹಂಗನ್ನು ತೊರೆದು ಕಾರ್ಯ ನಿರ್ವಹಿಸುವ ಪರಿಸ್ಥಿತಿ...೬೨ನೇ ಗಣರಾಜ್ಯೋತ್ಸವದ ಕೇವಲ ೨ ದಿನ ಮುಂಚೆ ಮಹಾರಾಷ್ಟ್ರದಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿ.

courtesy@The Telegraph

ಒಮ್ಮೆ ಯೋಚಿಸಿ ನೋಡಿ - ಇದಕ್ಕೆಲ್ಲ ಕಾರಣ ಯಾರು? ಭಾರತ ದೇಶದ ಸಮಸ್ತ ನಾಗರಿಕರೇ ಇದಕ್ಕೆಲ್ಲ ಹೊಣೆ ಎಂದರೆ ತಪ್ಪಾಗಲಾರದು. ಎಲ್ಲಿ ತನಕ ನಾವು "ಸ್ವಲ್ಪ adjust" ಮಾಡ್ಕೊಳಿ ಎನ್ನುವ ಮನಸ್ಥಿತಿಇಂದ ಹೊರಬರುವುದಿಲ್ಲವೂ ಅಲ್ಲಿಯ ತನಕ ಸುಧಾರಣೆ ಅಸಾಧ್ಯ!!!! 

Friday 14 January, 2011

संस्कृताय जीवनं

"हरि ॐ" - ಇದು ಬೆಂಗಳೂರಿನಲ್ಲಿ ಇತ್ತೇಚೆಗೆ ಜರುಗಿದ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಎಲ್ಲ ಸ್ವಯಂಸೇವಕರ ಬಾಯಿಂದ ಹೊರಟ ಧ್ವನಿ - ಮೇಳಕ್ಕೆ ಬಂದ ಜನರನ್ನು ನಗುಮೊಗದಿಂದ ಸ್ವಾಗತಿಸಿದ ಪರಿ!!

ಸ್ವಾಗತ ಕಮಾನು

ಜನವರಿ ೭ರಿಂದ, ೪ ದಿನಗಳ ಕಾಲ ನಡೆದ ಸಂಸ್ಕೃತ "ಉತ್ಸವ"ದಲ್ಲಿ ಪಾಲ್ಗೊಂಡ ಮಂದಿ ಲಕ್ಷಾಂತರ. ನಾನು ೨ ದಿನ ಮೇಳಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಏರ್ಪಡಿಸಿದ್ದ "ಜ್ಞಾನಗಂಗಾ" ಪ್ರದರ್ಶಿನಿ ಬಹಳ ಚೆನ್ನಾಗಿತ್ತು. ಪ್ರಾಚೀನ ಕಾಲದ ವೇದ-ವಿಜ್ಞಾನಗಳ ಕಿರು ಪರಿಚಯ, ಮಹಾಭಾರತ ಯುದ್ಧದ ವ್ಯೂಹ ರಚನೆಗಳ ಮಾದರಿ, Pencil ಮೊನೆಯ ಮೇಲೆ ಕೆತ್ತಿದ ಗಣಪನ ವಿಗ್ರಹ ಎಲ್ಲವೂ ಆಕರ್ಷಕವಾಗಿತ್ತು.

ಚಕ್ರ ವ್ಯೂಹ

ಸಂಸ್ಕೃತಕ್ಕೆ ಸಂಬಂದಪಟ್ಟ ಪುಸ್ತಕಗಳ ಮಾರಾಟ ಭರ್ಜರಿಯಾಗಿತ್ತು. ಎಲ್ಲ ೧೫೪ ಅಂಗಡಿಯ ಮುಂದೆ ಜನ ಜಾತ್ರೆ!!!!


ಮಾದರಿ "ಸಂಸ್ಕೃತ ಗ್ರಾಮ" ಇನ್ನೊಂದು ಆಕರ್ಷಣೆ. ವಿಧ್ಯಾಲಯ, ಅಂಚೆ ಕಚೇರಿ, ವಾಹನ ದುರಸ್ಥಿ ಸ್ಥಳ, ಸಂಸ್ಕೃತ ಭಾಷಿಕ ಮನೆ, ನ್ಯಾಯಾಲಯ - ಎಲ್ಲೆಲ್ಲೂ ಸಂಸ್ಕೃತದಲ್ಲೇ ಸಂಭಾಷಣೆ!!!

ಸಂಸ್ಕೃತ ಗ್ರಾಮ

ಇದಲ್ಲದೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜರುಗಿದವು. ಸಂಸ್ಕೃತ ಯಕ್ಷಗಾನ, ನಾಟಕ, ನೃತ್ಯ, ಹಾಡುಗಾರಿಕೆ, ವಿಚಾರ ಸಂಕೀರ್ಣ ಮುಂತಾದವು.

ವಿಚಾರ ಮಂಥನ



ಈ ಮೇಳದಿಂದ ನನಗೆ ಒಂದು ಒಳ್ಳೆ ಪ್ರಾಯೋಜನ ಆಯಿತು. ಬಹಳ ದಿನಗಳಿಂದ ಸಂಸ್ಕೃತ ಕಲಿಯಬೇಕು ಎಂದುಕೊಳ್ಳುತ್ತಿದ್ದೆ. ಆದರೆ ಸರಿಯಾದ ವೇದಿಕೆ ಸಿದ್ದವಾಗಿರಲಿಲ್ಲ :-) "ಸಂಸ್ಕೃತ ಭಾರತಿ" ಸಂಸ್ಥೆಯು, ಅಂಚೆ ಮೂಲಕ ಸಂಸ್ಕೃತ ಶಿಕ್ಷಣ ಎಲ್ಲ ವರ್ಗದ ಜನರಿಗೂ ದೊರೆಯುವಂತೆ ಮಾಡುತ್ತಿದ್ದಾರೆ. ನಾನು ಕೂಡ ಇದಕ್ಕೆ ಸೇರಿಕೊಂಡಿದ್ದೇನೆ. ವರ್ಷಕ್ಕೆ ೨ ಬಾರಿ ಪರೀಕ್ಷೆಗಳಿರುತ್ತದೆ. ಹೆಚ್ಚಿನ ವಿವರಗಳಿಗೆ ಸಂಸ್ಕೃತ ಭಾರತಿ ಶಾಖೆಗಳನ್ನೂ ಸಂಪರ್ಕಿಸಬಹುದು - http://www.samskritabharati.org/sbindia/

ಅಂತೂ ಈ ಮೇಳ ಸಂಸ್ಕೃತವು ಇನ್ನೂ ಜೀವಂತವಾಗಿದೆ ಎಂದು ನಿರೂಪಿಸುವಲ್ಲಿ ಯಶಸ್ವಿಯಾಯಿತು.