Thursday 1 November, 2012

ಜುಗಾರಿ ಕ್ರಾಸ್

ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿಗಳು ನನಗೆ ಬಹ ಇಷ್ಟ ಆಗುತ್ತವೆ. ಕಾರಣ - ಪ್ರಕೃತಿಗೆ ಹತ್ತಿರವಾಗಿರುವ ಅವರ ಬರಹಗಳು ನಮಗೆ ಪ್ರಕೃತಿ ಮಡಿಲಿನಲ್ಲಿ ಓಡಾಡಿದ ಅನುಭವ ನೀಡುವಂತಿರುತ್ತದೆ.


"ಜುಗಾರಿ ಕ್ರಾಸ್" - ಇತ್ತೀಚಿಗೆ ಓದಿ ಮುಗಿಸಿದ ತೇಜಸ್ವಿಯವರ ಮತ್ತೊಂದು ಕಾದಂಬರಿ. ಕಾದಂಬರಿ ಬಗ್ಗೆ ಎರಡೇ ಪದಗಳಲ್ಲಿ ಹೇಳಬೇಕೆಂದರೆ - Simply Superb !!!
ಮೊದಲ ಪುಟದಿಂದ ಕೊನೆಯ ಪುಟದವರೆಗೂ ಹಿಡಿದಿಟ್ಟು ಕೂರಿಸುವಂತ ಕಾದಂಬರಿ. ಪುಸ್ತಕ ಕೆಳಗಿಡಲು ಮನಸ್ಸೇ ಬರವುದಿಲ್ಲ. ಮಲೆನಾಡಿನ ಕಾಡುಗಳಲ್ಲಿ ಸಾಗುವ ನಿಧಿ ಶೋಧನೆ, ಕಾಳ ದಂಧೆಯ ಕಥೆಯನ್ನು ಕೇವಲ 24 ಗಂಟೆಗಳ ಅವಧಿಯಲ್ಲಿ ಜರುಗುವ ಘಟನೆಗಳ ರೂಪದಲ್ಲಿ ಪ್ರಸ್ತುತಪಡಿಸಿದ್ದಾರೆ.
ಸಿನಿಮಾ ಮಾಡಲು ಒಳ್ಳೆಯ ಕಥಾವಸ್ತು. ಯಾಕೆ ನಮ್ಮ ಕನ್ನಡ ಸಿನಿಮಾ ನಿರ್ಮಾಪಕರಿಗೆ ಇಂತ ಕಥೆಗಳು ಕಾಣಿಸುವುದಿಲ್ಲವೋ - ತಿಳಿಯದು!! ಮಚ್ಚು ಲಾಂಗು ರೌಡಿಸಂ ಸಿನೆಮಾಗಳ ಬದಲಿಗೆ ಇಂತ ಸದಭಿರುಚಿಯ ಕಥೆಗಳನ್ನು ಸಿನಿಮಾ ಮಾಡಬಹುದಲ್ಲವೇ!!

ಲೇಖಕರು - ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು - ಪುಸ್ತಕ ಪ್ರಕಾಶನ, ಸರಸ್ವತಿಪುರಂ, ಮೈಸೂರು