Tuesday 1 November, 2011

ಪುಸ್ತಕ ಪರಿಚಯ - "ಮಹಾಬ್ರಾಹ್ಮಣ"

೫೫ನೇ ರಾಜ್ಯೋತ್ಸವದ ಶುಭಾಶಯಗಳು!



ಮಹಾಬ್ರಾಹ್ಮಣದ ಕಥೆ ಪ್ರಸಿದ್ಧರಾದ ವಸಿಷ್ಠ ವಿಶ್ವಾಮಿತ್ರರದು. ಕೌಶಿಕ ಮಹಾರಾಜ ವಸಿಷ್ಠರ ಬಳಿ ಇದ್ದ "ನಂದಿನಿ" ಎಂಬ ಹಸುವನ್ನು ಪಡೆಯಲು ಪ್ರಯತ್ನಿಸಿ, ವಿಫಲನಾಗಿ ಕೊನೆಗೆ ಅಹಂಭಾವವನ್ನು ತ್ಯಜಿಸಿ ವಿಶ್ವಕ್ಕೆ ಮಿತ್ರನಾದ "ವಿಶ್ವಾಮಿತ್ರ" ಬ್ರಹ್ಮರ್ಷಿಯಾಗಿ ಬದಲಾಗುವ ಕಥೆಯೇ ಮಹಾಬ್ರಾಹ್ಮಣ. ಹುಟ್ಟಿನಿಂದ ಕ್ಷತ್ರಿಯನಾದರೂ ಮುಂದೆ ಕರ್ಮದಿಂದ ಬ್ರಹ್ಮತ್ವವನ್ನು ಸಾಧಿಸಿದ ಬಗೆಯನ್ನು ಇಲ್ಲಿ ಚಿತ್ರಿಸಿದ್ದಾರೆ. ವಿಶ್ವಾಮಿತ್ರರ ಜೀವನದ ಬಗ್ಗೆ ಒಂದು ಒಳ್ಳೆ ಪರಿಚಯ ನೀಡಲಾಗಿದೆ.

ಲೇಖಕರು - ದೇವುಡು ನರಸಿಂಹಶಾಸ್ತ್ರಿ
ವಿತರಕರು - ಟಿ.ಎನ್.ಕೃಷ್ಣಯ್ಯಶೆಟ್ಟಿ ಅಂಡ್ ಸನ್, ಚಿಕ್ಕಪೇಟೆ, ಬೆಂಗಳೂರು

1 comment:

  1. ನಿಮಗೂ ಸಹ ರಾಜ್ಯೋತ್ಸವದ ಶುಭಾಶಯಗಳು ಸರ್ :o)

    ReplyDelete