Wednesday 19 October, 2011

ಪುಸ್ತಕ ಪರಿಚಯ - "ಕಾಡು ಪ್ರಾಣಿಗಳ ಜಾಡಿನಲ್ಲಿ"




ಈ ಪುಸ್ತಕದ ಲೇಖಕರು - ಕೆ. ಉಲ್ಲಾಸ ಕಾರಂತ. ಇವರು ಹುಲಿ ಹಾಗು ಅದಕ್ಕೆ ಸಂಬಂಧಿಸಿದ ಸಂರಕ್ಷಣೆಯ ವಿಷಯಗಳಲ್ಲಿ ಪ್ರಪಂಚದ ಅಗ್ರಮಾನ್ಯ ಪರಿಣತರಲ್ಲಿ ಒಬ್ಬರು.

ಈ ಪುಸ್ತಕದಲ್ಲಿ ಕರ್ನಾಟಕದ ಕಾಡು ಪ್ರಾಣಿಗಳ ಸಂಕ್ಷಿಪ್ತ ಪರಿಚಯವಿದೆ. ಹಾಗೆಯೇ ಅರಣ್ಯ ನಾಶದ ಕಾರಣ ಮತ್ತು ಪರಿಣಾಮಗಳನ್ನು ವಿವರವಾಗಿ ನೀಡಲಾಗಿದೆ. ವೈಜ್ಞಾನಿಕ ತಳಹದಿಯ ಮೇಲೆ ಹೇಗೆ ಕಾಡು ಹಾಗು ವನ್ಯಜೀವಿಗಳನ್ನು ರಕ್ಷಿಸಿ ಬೆಳೆಸಬೇಕೆಂಬ ಬಗೆಗೂ ಚಿಂತಿಸಲಾಗಿದೆ.

ಇತ್ತೀಚಿಗೆ ಆನೆಗಳು ನಾಡಿಗೆ ನುಗ್ಗಿ ಬೆಳೆ ನಾಶ ಮಾಡುತ್ತದೆ ಎಂದು ಎಲ್ಲೆಲೂ ಸುದ್ಧಿ. ಸರ್ಕಾರ ಒಂದಿಷ್ಟು ಪರಿಹಾರ ಅಂತ ನೀಡಿ ಮರೆತು ಬಿಡುತ್ತದೆ. ಕೆಲವು ಕಡೆ ಅದೂ ಇಲ್ಲ !! ಆದರೆ ಅವು ಯಾಕೆ ಕಾಡು ಬಿಟ್ಟು ನಾಡಿಗೆ ಬರುತ್ತವೆ, ಮುಂದೆ ಹೀಗಾಗದಂತೆ ಏನು ಮಾಡಬೇಕು ಎಂದು ಯೋಚಿಸುವ ಬುದ್ಧಿ ನಮ್ಮ ಯಾವ ಸರ್ಕಾರಕ್ಕೂ ಇಲ್ಲ !!

ಲೇಖಕರು - ಕೆ. ಉಲ್ಲಾಸ ಕಾರಂತ
ವಿತರಕರು - ನವಕರ್ನಾಟಕ ಪ್ರಕಾಶನ

2 comments:

  1. ಉತ್ತಮ ಪುಸ್ತಕವನ್ನು ಪರಿಚಯಿಸಿದ್ದೀರಿ ಸರ್..

    ReplyDelete